ದುರೈಸಾಮಿ ಜಿಯೋಫ್ರಿ ಸ್ಯಾಮ್ಯುಯೆಲ್ ದಿನಕರನ್ (೧ ಜುಲೈ ೧೯೩೫ - ೨೦ ಫೆಬ್ರುವರಿ ೨೦೦೮) ಭಾರತೀಯ ಇವ್ಯಾಂಜೆಲಿಕಲ್ ಬೋಧಕರಾಗಿದ್ದರು. ಅವರು `ಜೀಸಸ್ ಕಾಲ್ಸ್' ಸಚಿವಾಲಯ ಮತ್ತು 'ಕಾರುಣ್ಯ ವಿಶ್ವವಿದ್ಯಾಲಯ' ದ ಸಂಸ್ಥಾಪಕರಾಗಿದ್ದರು. == ಆರಂಭಿಕ ಜೀವನ == ದಿನಕರನ್ ರವರು ೧೯೩೫ ರ ಜುಲೈ ೧ ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರೆಸಿಡೆನ್ಸಿ (ಇಂದು ತಮಿಳುನಾಡು) ನ ತಿರುನೆಲ್ವೇಲಿ ಜಿಲ್ಲೆಯ ಸೂರಂಡೈನಲ್ಲಿ ಜನಿಸಿದರು. ಅವರು ಸೈಂಟ್ ಜಾನ್ಸ್ ಕಾಲೇಜಿನಲ್ಲಿ ಪಾಲಯಂಕೊಟ್ಟೈಗೆ ಸೇರಿದರು ಮತ್ತು ೧೯೫೫ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು. == ಸಚಿವಾಲಯ == ದಿನಕರನ್ ರವರು ಬ್ಯಾಂಕಿನ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ಸುವಾರ್ತಾ ಸೇವೆಯನ್ನು ಮಾಡುತ್ತಿದ್ದರು. 'ಜೀಸಸ್ ಕಾಲ್ಸ್' ಸಚಿವಾಲಯವನ್ನು ಸ್ಥಾಪಿಸಿದರು. ಅವರ ಸಾವಿನ ಸಮಯದಲ್ಲಿ, ಭಾರತ ಮತ್ತು ವಿದೇಶದಲ್ಲಿ ೨೦ ಕ್ಕಿಂತಲೂ ಹೆಚ್ಚಿನ ನೆಲೆಗಳನ್ನು ಹೊಂದಿದ್ದರು ಮತ್ತು ಅವರ ಜೀವಿತಾವಧಿಯಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಚಾರ್ಸ್ಮಾಟಿಕ್ ಸುವಾರ್ತಾಬೋಧಕರಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತರಾಗಿದ್ದರು. ಪೆಂಟೆಕೋಸ್ಟಲಿಸಂನ ಅಧ್ಯಯನದಲ್ಲಿ ಶೈಕ್ಷಣಿಕ ಪರಿಣಿತರಾದ ಅಲನ್ ಆಂಡರ್ಸನ್, ದಿನಕರನ್ ಮತ್ತು ಅಮೆರಿಕದ ಓರಲ್ ರಾಬರ್ಟ್ಸ್ ರವರ ನಡುವಿನ ಹೋಲಿಕೆಗಳನ್ನು ನೋಡುತ್ತಾರೆ. ರಾಬರ್ಟ್ಸ್ ಒಂದಿಗೆ ಹೋಲಿಕೆಯಲ್ಲಿ ಒಂದಾದ ದಿನಕರನ್ ಅವರು 'ಕಾರುಣ್ಯ ವಿಶ್ವವಿದ್ಯಾನಿಲಯ' ಸ್ಥಾಪನೆಯಲ್ಲಿ ತೊಡಗಿದ್ದರು. ಈ ಕ್ರಿಶ್ಚಿಯನ್ ಸಂಸ್ಥೆಯ ಮೊದಲ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದರು. 'ಸೀಶ' ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಗ್ರಾಮೀಣ ಜನರಿಗೆ ನೆರವಾಗುವುದರೊಂದಿಗೆ ಶಿಕ್ಷಣ ನೀಡುವ ಸ್ವಯಂಪ್ರೇರಿತ ಸಂಸ್ಥೆಯಾಗಿದೆ. ದಕ್ಷಿಣ ಭಾರತದ ಚರ್ಚ್ ಸದಸ್ಯರಾಗಿ ಉಳಿದಿದ್ದ ದಿನಕರನ್, ಸುವಾರ್ತೆ ಸಾರುವ ಮಾಧ್ಯಮವಾಗಿ ದೂರದರ್ಶನದ ಸಂಭಾವ್ಯತೆಯನ್ನು ಪ್ರಶಂಸಿಸಲು ಮೊದಲ ಭಾರತೀಯ ಕ್ರಿಶ್ಚಿಯನ್ ನಾಯಕರಲ್ಲಿ ಒಬ್ಬರಾಗಿದ್ದರು. ಇದನ್ನು ಮಾಡುವುದರಲ್ಲಿ ಅವರು ಅಮೆರಿಕದಲ್ಲಿ ಸ್ಥಾಪಿತವಾದ ಮಾದರಿಯನ್ನು ಅನುಸರಿಸುತ್ತಿದ್ದರು ಮತ್ತು ಭಾರತೀಯ ಚಲನಚಿತ್ರೋದ್ಯಮವನ್ನು ಗ್ರಹಿಸಿದ ನೈತಿಕ ಸವಲತ್ತುಗಳೊಂದಿಗೆ ದೂರದರ್ಶನದೊಂದಿಗೆ ಸಂಬಂಧ ಹೊಂದಿದ್ದ ಅವರ ಗೆಳೆಯರೊಂದಿಗೆ ಸಂಪ್ರದಾಯವಾದಿ ಅಭಿಪ್ರಾಯಗಳನ್ನು ಪ್ರಶ್ನಿಸಿದರು. ಅವರು ೧೯೭೨ ರಿಂದ ರೇಡಿಯೊ ಕಾರ್ಯಕ್ರಮಗಳಲ್ಲಿ ತಮ್ಮ ಸಂದೇಶವನ್ನು ಪ್ರಸಾರ ಮಾಡಿದರು. ಆ ಉದ್ದೇಶಕ್ಕಾಗಿ ಅವರು ಎಫ್. ಇ. ಬಿ. ಎ ನೆಟ್ವರ್ಕ್ ಅನ್ನು ಬಳಸುತ್ತಿದ್ದರು. ೧೯೯೦ ರ ದಶಕದ ಮಧ್ಯಭಾಗದಲ್ಲಿ 'ಜೀಸಸ್ ಕಾಲ್ಸ್' ಸಚಿವಾಲಯ ಟೆಲಿವಿಷನ್ ಪ್ರಸಾರವನ್ನು ಪ್ರಾರಂಭಿಸಿತು. ಪ್ರಸರಣ ಘಟಕವು ಈಗ ಗಣನೀಯವಾಗಿದೆ ಮತ್ತು ಅವರ ಜೀವಿತಾವಧಿಯಲ್ಲಿ ಅವರ ಪುತ್ರನಾದ ಪೌಲ್ ದಿನಕರನ್ ರವರು ಮಿನಿಷ್ಟ್ರಿಯನ್ನು ನೋಡಿಕೊಳ್ಳುತ್ತಿದ್ದರು. ದಿನಕರನ್ ಅವರ ಮರಣದ ನಂತರ ಅವರ ಮಗ ಪೌಲ್ ದಿನಕರನ್ ರವರು ಇದರ ಉಸ್ತುವಾರಿಯನ್ನು ವಹಿಸಿಕೊಂಡರು. ಅಮೆರಿಕದಲ್ಲಿ ಬಳಸಿದ ವಿಧಾನಗಳ ಅನುಸಾರ, ಚೆನ್ನೈನಲ್ಲಿ ಬೃಹತ್ ಪ್ರಾರ್ಥನಾ ಗೋಪುರವನ್ನು ನಿರ್ಮಿಸಿದರು. ದಿನಕರನ್ ಪಾಶ್ಚಿಮಾತ್ಯ ವಸ್ತ್ರಗಳನ್ನು ಧರಿಸಿ ತಮ್ಮ ದೂರದರ್ಶನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು ಮತ್ತು ಅವರು ಪಾಶ್ಚಿಮಾತ್ಯ ಹಾಡುಗಳನ್ನು ಮತ್ತು ಸಂಗೀತವನ್ನು ಬಳಸಿಕೊಂಡರು. ದೇವರ ವಾಕ್ಯವನ್ನು ದೇಶ ಮತ್ತು ವಿದೇಶದಾದ್ಯಂತ ಸಾರಿದರು. ಅವರು ೧೫ ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು ಮತ್ತು ಅನೇಕ ಕ್ರಿಶ್ಚಿಯನ್ ಸಂಗೀತದ ಆಲ್ಬಂಗಳನ್ನು ಧ್ವನಿಮುದ್ರಿಸಿದರು. == ಮರಣ == ಹೃದಯ ಮತ್ತು ಕಿಡ್ನಿ ಕಾಯಿಲೆಯ ನಿಮಿತ್ತ ೨೦ ಫೆಬ್ರವರಿ ೨೦೦೮ ರಂದು ದಿನಕರನ್ ರವರು ಆಸ್ಪತ್ರೆಯಲ್ಲಿ ನಿಧನರಾದರು. == ಉಲ್ಲೇಖ ==